
ಯುವಶಕ್ತಿ ಸೇವಾಪಥ :
ಸಂಸ್ಥೆಯ ಸಮಾಜಸೇವೆ ಮನಗಂಡು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರ ಸ್ವೀಕರಿಸಿದ ಬಳಿಕ ತನ್ನ ಸೇವಾ ಕಾರ್ಯವನ್ನು ಜಿಲ್ಲಾ ಮಟ್ಟಕ್ಕೆ ವಿಸ್ತರಿಸಿ ಯುವಶಕ್ತಿ ಸೇವಾಪಥ ಎಂಬ ಹೊಸ ಯೋಜನೆಗೆ ಕಾರಿಂಜೇಶ್ವರ ಕ್ಷೇತ್ರದಲ್ಲಿ ಶುಭಾರಂಭ ನೀಡಿ ವಿವಿಧ ಕ್ಷೇತ್ರಗಳಲ್ಲಿ ಸೇವಾನಿಧಿ ಕಾರ್ಯಕ್ರಮಗಳು, ತ್ರೈಮಾಸಿಕ ಹಾಗೂ ವಾರ್ಷಿಕ ಯೋಜನೆಗಳನ್ನು ನಿರಂತರವಾಗಿ ನಡೆಸಿಕೊಂಡು ಬಂದಿದೆ.
ಸೇವಾಪಥದ ಮೂಲಕ ಸುಮಾರು 560 ಜನರಿಂದ ಕೇಶದಾನ ಮಾಡಿಸಿ ಕ್ಯಾನ್ಸರ್ ಬಾಧಿತರಿಗೆ 6 ಉಚಿತ ಟೋಪನ್ ಹಸ್ತಾಂತರ ಮಾಡಿದ ಹೆಮ್ಮೆ ಯುವಶಕ್ತಿ ತಂಡದ್ದು. ಯುವಶಕ್ತಿ ಸೇವಾಪಥದ ಮೂಲಕ ಸೇರಿದಂತೆ ಒಟ್ಟು 1 ಕೋಟಿಗೂ ಮಿಕ್ಕಿ ರೂಪಾಯಿ ಮೊತ್ತವನ್ನು ಸಮಾಜಕ್ಕರ್ಪಿಸಿ ನೊಂದವರ ಬಾಳಿಗೆ ಬೆಳಕಾದ ಸಂಸ್ಥೆ ಯುವಶಕ್ತಿ ಸೇವಾಪಥ ದ.ಕ
YUVASHAKTHI SEVA PATHA
ಯುವಶಕ್ತಿಯ ಮಾತೃಸಂಸ್ಥೆ ಹಾಗೂ ಎಲ್ಲಾ ಸಹಸಂಸ್ಥೆಗಳು ಗುರುತಿಸಿಕೊಳ್ಳುವುದು Team YSK ಬ್ರಾಂಡ್ ಮೂಲಕ..
ಮಂಗಳೂರು..ಉಡುಪಿ..ಕಾಸರಗೋಡು ಬೆಂಗಳೂರು ಭಾಗಗಳಲ್ಲಿ ನಿತ್ಯ ನಿರಂತರ ಸೇವಾಕಾರ್ಯ..